23.5 C
Kadaba
Saturday, March 15, 2025

ಹೊಸ ಸುದ್ದಿಗಳು

ಎಂಡೋಸಲ್ಫಾನ್ ಸಂತ್ರಸ್ತೆ ಬಾವಿಗೆ ಬಿದ್ದು ಮೃತ್ಯು

ಬಾವಿಗೆ ಅಳವಡಿಸಿರುವ ನೆಟ್ ಮೇಲಿನ ಕಸ ತೆಗೆಯುವ ವೇಳೆ ದುರ್ಘಟನೆ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಪುತ್ತೂರು: ನೆಟ್ಟಣಿಗೆಮುಡ್ನೂರು ಗ್ರಾಮದ ಬೆದ್ರಾಡಿ ನಿವಾಸಿಯಾಗಿದ್ದ ಎಂಡೋಸಲ್ಫಾನ್ ಸಂತ್ರಸ್ತೆಯೋರ್ವರು ಬಾವಿಗೆ ಬಿದ್ದು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.‌

kadabatimes.in

ಬೆದ್ರಾಡಿ ನಿವಾಸಿ ಮಹಮ್ಮದ್ ಎಂಬವರ ಪುತ್ರಿ ಮಿಸ್ರಿಯಾ(24ವ)ರವರು ಮೃತಪಟ್ಟವರು.

kadabatimes.in
kadabatimes.in

ಅವರು ಮದುವೆಯಾಗದೆ ಮಾನಸಿಕ ರೋಗಿ ಮತ್ತು ಎಂಡೋಸಲ್ಫಾನ್ ಸಂತ್ರಸ್ತೆಯಾಗಿದ್ದು ಮಾ.9ರಂದು ಮಹಮ್ಮದ್ ಅವರು ಪುತ್ರಿ ಮಿಸ್ರಿಯಾ ಅವರಲ್ಲಿ, ಮನೆಯ ಹಿಂಬದಿ ಇರುವ ಬಾವಿಗೆ ಅಳವಡಿಸಿರುವ ನೆಟ್ ಮೇಲಿನ ಕಸವನ್ನು ಸ್ವಚ್ಛಗೊಳಿಸುಂತೆ ತಿಳಿಸಿ ಗಾಳಿಮುಖ ಪೇಟೆಗೆ ಹೋಗಿದ್ದರು.

kadabatimes.in

ಮಧ್ಯಾಹ್ನ ವೇಳೆ ಮಿಸ್ರಿಯಾರವರು ನೆಟ್ಟನ್ನು ಸ್ವಚ್ಛಗೊಳಿಸುವ ಸಂದರ್ಭ ಆಯ ತಪ್ಪಿ ಬಾವಿಗೆ ಬಿದ್ದಿದ್ದರು.ನೆ ರೆಕರೆಯವರ ಸಹಾಯದಿಂದ ಮಿಸ್ರಿಯಾರವರನ್ನು ಬಾವಿಯಿಂದ ಮೇಲೆತ್ತಿ ನೋಡಿದಾಗ ಆಗಲೇ ಆಕೆ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.