ಕಡಬ ಟೈಮ್, ಕ್ರೈಂ ಸುದ್ದಿ: ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಡಬ ಪೊಲೀಸರು ಬಂಧಿಸಿದ್ದು ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


2010ರ ಎಪ್ರಿಲ್ 15 ರಂದು ಸವಣೂರು ಪೇಟೆಯಲ್ಲಿ ಅಟ್ಟೋಳೆಯ ಶೇಷಪ್ಪ ಎಂಬವರಿಗೆ ತಂಡವೊಂದು ಹಲ್ಲೆ ಮಾಡಿತ್ತು.ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿದರೂ ಓರ್ವ ಆರೋಪಿ ತಲೆ ಮರೆಸಿಕೊಂಡಿದ್ದ.


ಇದೀಗ ಹದಿಮೂರು ವರ್ಷಗಳ ಬಳಿಕ ತಲೆ ಮರೆಸಿಕೊಂಡಿದ್ದ ಪಡ್ನೂರು ಗ್ರಾಮದ ನೆಲಪಾಲ ನಿವಾಸಿ ಶ್ರೀಷ ಎಂಬಾತನನ್ನು ಕಡಬ ಪೊಲೀಸರು ಮಂಗಳೂರಿನ ಸೂರತ್ಕಲ್ ನಿಂದ ಬಂಧಿಸಿದ್ದಾರೆ.


ಉಪ್ಪಿನಂಗಡಿ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್ ನಿರ್ದೇಶನದಂತೆ ಠಾಣಾ ಎಸೈಗಳಾದ ಅಭಿನಂದನ್, ಅಕ್ಷಯ್ ಡವಗಿ ಅವರ ಆದೇಶದಂತೆ ಸಿಬ್ಬಂದಿಗಳಾದ ರಾಜು ನಾಯಕ್ , ಪ್ರವೀಣ್, ಇಸಾಕ್ ವಾರೆಂಟ್ ಆರೋಪಿಯ ಬಂಧನದ ತಂಡದಲ್ಲಿದ್ದರು.


ಉಲ್ಲೇಖ: ಕಡಬ ಪೊಲೀಸ್ ಠಾಣಾ LPC No 03/2019 ಹಾಗೂ Crime no 56/2010 , ಕಲಂ-341,323 IPC ಮಾನ್ಯ ACJ & JMFC ಪುತ್ತೂರು ನ್ಯಾಯಾಲಯ ಹಾಗೂ CC NO 1582/2012 ರಲ್ಲಿ LPC ವಾರೆಂಟ್ ಹೊರಡಿಸಲಾಗಿತ್ತು