25.1 C
Kadaba
Friday, March 14, 2025

ಹೊಸ ಸುದ್ದಿಗಳು

Court order-ದಲಿತ ಸಂಘದ ಅಧ್ಯಕ್ಷನಿಂದ ದೈವನ‌ರ್ತಕನಿಗೆ ಬೆದರಿಕೆ: ಹಣ ವಸೂಲಿ ಆರೋಪ

ಇಬ್ಬರ ವಿರುದ್ದ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್‌ ಸೂಚನೆ

Must read

Kadabatimes
Kadabatimeshttps://kadabatimes.in
ಕಡಬ ಟೈಮ್ಸ್ ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮವಾಗಿದೆ.ರಾಜಕೀಯ ಹಸ್ತಕ್ಷೇಪ ಇಲ್ಲದ, ಬಂಡವಾಳ ಶಾಹಿಗಳ ನಿಯಂತ್ರಣದಲ್ಲಿರದ ಸ್ಥಳೀಯ ಆನ್ಲೈನ್ ಮಾಧ್ಯಮ ಇದಾಗಿದ್ದು ಕಡಬ ತಾಲೂಕು ಕೇಂದ್ರಿತ ಸುದ್ದಿಗಳನ್ನು ಹೆಚ್ಚು ಪ್ರಕಟಿಸುತ್ತಿದೆ. ಸ್ಥಳೀಯ ತಾಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರದ ಪ್ರಮುಖ ವಿಚಾರಗಳನ್ನು ಪ್ರಕಟಿಸುತ್ತದೆ. ನಿಮ್ಮೂರಿನ ಸುದ್ದಿಗಳು, ಜಾಹೀರಾತು ಅಥವಾ ಸಲಹೆಗಳಿದ್ದರೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು

ಕಡಬ ಟೈಮ್, ವಿಟ್ಲ: ದೈವ ನರ್ತಕನನ್ನು ಬೆದರಿಸಿ, ಹಣ ಮತ್ತು ಚೆಕ್‌ ವಸೂಲಿ ಮಾಡಿದ ಬಗ್ಗೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಂಟ್ವಾಳ ಎಡಿಷನಲ್‌ ಸಿವಿಲ್‌ ಜಡ್ಜ್ ಮತ್ತು ಜೆ.ಎಂ.ಎಫ್‌.ಸಿ. ನ್ಯಾಯಾಲಯ ಆದೇಶಿಸಿದೆ.

kadabatimes.in

ವಿಟ್ಲದ ದ.ಕ. ಜಿಲ್ಲಾ ದಲಿತ ಸಂಘದ ಸ್ಥಾಪಕಾಧ್ಯಕ್ಷ  ಸೇಸಪ್ಪ ಬೆದ್ರಕಾಡು ಮತ್ತು ವಿಟ್ಲದ ನೆಕ್ಕರೆಕಾಡು ನಿವಾಸಿ ಕಮಲಾ ವಿರುದ್ದ ಎಫ್‌ಐಆರ್‌ ದಾಖಲಿಸುವಂತೆ ಕೋರ್ಟ್‌ ಸೂಚಿಸಿದೆ. ಸಂತ್ರಸ್ತ ಆನಂದ ಸುರುಳಿಮೂಲೆ ವಿಟ್ಲ ಠಾಣೆಗೆ ದೂರು ನೀಡಿದಾಗ ಸ್ಪಂದಿಸದ ಹಿನ್ನೆಲೆಯಲ್ಲಿ ವಕೀಲ ಶಿವಾನಂದ ವಿಟ್ಲ ಮೂಲಕ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

kadabatimes.in
kadabatimes.in

ನಲಿಕೆ ಸಮುದಾಯಕ್ಕೆ ಸೇರಿದ ವಿಟ್ಲ ಸುರುಳಿಮೂಲೆ ನಿವಾಸಿ ಆನಂದ ದೈವ ನರ್ತನೆಯ ಜತೆಗೆ ನಾಟಿ ವೈದ್ಯ ಹಾಗೂ ಜೋತಿಷಿ ವೃತ್ತಿಯನ್ನು ಮಾಡುತ್ತಿದ್ದರು. ಕಮಲಾ ಸಮಸ್ಯೆಯ ಪರಿಹಾರಕ್ಕಾಗಿ ಆನಂದ ಅವರ ಬಳಿ ಬಂದಿದ್ದು, ಈ ವೇಳೆ ಅವರು ಬಾಧೆ ತೆಗೆಯಲು ಪೂಜೆ ಮಾಡುವಂತೆ ಸೂಚಿಸಿ ಅದರ ವೆಚ್ಚ 15 ಸಾವಿರ ರೂ. ನೀಡಬೇಕೆಂದು ತಿಳಿಸಿದ್ದರು. ಪೂಜೆ ಮಾಡಿದ ಅನಂತರ ಆ ಮಹಿಳೆ ಮತ್ತು ಅವಳ ಪತಿ ಬಾಲಕೃಷ್ಣ ಪೂಜೆಯ ಹಣವನ್ನು 1 ತಿಂಗಳಲ್ಲಿ ಪಾವತಿಸುತ್ತೇವೆ ಎಂದು ಹೇಳಿ ಕೊಟ್ಟಿಲ್ಲ. ಹಣದ ಬಗ್ಗೆ ವಿಚಾರಿಸಿದಾಗ, ನನ್ನಲ್ಲಿ ಹಣ ಕೇಳಿದರೆ ನಿನ್ನ ಮೇಲೆ ಅತ್ಯಾಚಾರದ ಕೇಸು ದಾಖಲಿಸುವುದಾಗಿ ಬೆದರಿಸಿದ್ದಾರೆ

kadabatimes.in
2024ರ ಅ. 10ರಂದು ಮಹಿಳೆಯು ಸೇಸಪ್ಪ ಬೆದ್ರಕಾಡು ನೆರವಿನಿಂದ ಪೊಲೀಸರ ಮೇಲೆ ಪ್ರಭಾವ ಬೀರಿ ಠಾಣೆಯಲ್ಲಿ ಬಲಾತ್ಕಾರವಾಗಿ ಸುಳ್ಳು ಹೇಳಿಕೆಯನ್ನು ಬರೆಸಿಕೊಂಡು ಸಹಿ ಪಡೆದು ಇನ್ನು ಅವರಿಗೆ ಬರಬೇಕಾಗಿದ್ದ ಹಣವನ್ನು ಕೇಳದಂತೆ ಬೆದರಿಸಿದ್ದಾರೆ. 1.25 ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟು ಬೆದರಿಸಿದ್ದರು. ತಲಾ 25 ಸಾವಿರದ 5 ಚೆಕ್‌ ಸೇಸಪ್ಪ ಬೆದ್ರಕಾಡು ಅವರಿಗೆ ನೀಡಲಾಗಿದೆ. ನ. 23ರಂದು 25 ಸಾವಿರವನ್ನು ಸೇಸಪ್ಪ ಅವರ ಹೆಂಡತಿಯ ಖಾತೆಗೆ ಫೋನ್‌ ಪೇ ಮಾಡಿದ್ದು, ಈ ವೇಳೆ ಇನ್ನಷ್ಟು ಹಣಕ್ಕಾಗಿ ಬೆದರಿಕೆಯೊಡ್ಡಿದ್ದಾರೆ ಎಂದು ಆನಂದ ದೂರಿನಲ್ಲಿ ತಿಳಿಸಿದ್ದಾರೆ.