ಕಡಬ
ಟೈಮ್, ನೆಲ್ಯಾಡಿ: ವಿವಾಹಪೂರ್ವ ಶೂಟಿಂಗ್ ನಡೆಸಲೆಂದು
ಬೆಂಗಳೂರಿನಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ತಂಡವಿದ್ದ ಕಾರೊಂದು ನೆಲ್ಯಾಡಿಯ ಕೋಣಾಲು ಬಳಿ ಅಪಘಾತಕ್ಕೀಡಾಗಿ
ಭಾವಿ ವಧುವರರ ಸಹಿತ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.




ಬೆಂಗಳೂರಿನ
ನೆಲಮಂಗಲದ ನಿವಾಸಿಗರಾದ ವಿವಾಹ ನಿಶ್ಚಿತಾರ್ಥವಾಗಿದ್ದ ಭಾವಿ ವರ ಹಾಗೂ ಭಾವಿ ವಧು , ಮತ್ತಾಕೆಯ ಬ್ಯೂಟೀಷಿಯನ್
ಹಾಗೂ ಕಾರು ಚಾಲಕರ ತಂಡ ಬೆಂಗಳೂರಿನಿಂದ ಕಾರಿನಲ್ಲಿ ಪ್ರಯಾಣಿಸಿ ಮೇಲುಕೋಟೆಯಲ್ಲಿ ಶ್ಯೂಟಿಂಗ್ ಮುಗಿಸಿದ್ದರು.


ನಂತರ
ಉಡುಪಿಯತ್ತ ಪ್ರಯಾಣಿಸುತ್ತಿದ್ದಾಗ ಬೆಂಗಳೂರು-ಮಂಗಳೂರು ಹೆದ್ದಾರಿಯ ಕಡಬ ತಾಲೂಕು ಕೋಣಾಲು ಗ್ರಾಮದ ಕರ್ಬ ಸಂಕ ಎಂಬಲ್ಲಿ ರಾತ್ರಿ
ವೇಳೆ ಅಪಘಾತಕ್ಕೀಡಾಗಿತ್ತು. ಇದರಿಂದ ಕಾರಿನಲ್ಲಿದ್ದ ನಾಲ್ವರಿಗೂ ಗಂಬೀರ ಸ್ವರೂಪದ ಗಾಯಗಳಾಗಿದೆ.


ಈ
ತಂಡದ ಶ್ಯೂಟಿಂಗ್ ಸಿಬ್ಬಂದಿಗಳು ಬೇರೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಅಪಘಾತಕ್ಕೀಡಾಗಿರುವುದನ್ನು ಕಂಡು ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು. ಅಪಘಾತದಿಂದ ಭಾವಿ ವಧುವರರ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.