

![]() ![]() |
ಪೊಲೀಸರು ವಶಕ್ಕೆ ಪಡೆದ ಕಾರು ಮತ್ತು ದನಗಳು |


ಬೆಳ್ಳಾರೆ:
ರಾತ್ರಿ ವೇಳೆ ಕಾರಿನಲ್ಲಿ
ಅಕ್ರಮ ದನ
ಸಾಗಾಟ ಮಾಡಲು ತಯಾರಿ ನಡೆಸುತ್ತಿದ್ದ ಸ್ಥಳಕ್ಕೆ
ಪೊಲೀಸರು ದಾಳಿ ನಡೆಸಿದ ಘಟನೆ ಅ.14ರಂದು ಕಲ್ಮಡ್ಕ ಗ್ರಾಮದಿಂದ ವರದಿಯಾಗಿದೆ.
ಮುಚ್ಚಿಲ
ಎಂಬಲ್ಲಿ ಸ್ವಿಪ್ಟ್
ಕಾರೊಂದರಲ್ಲಿ ಅಕ್ರಮವಾಗಿ ದನಗಳನ್ನು ತುಂಬಿಸಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಬೆಳ್ಳಾರೆ ಪೊಲೀಸ್ ಎಸ್.ಐ
ಈರಯ್ಯ ಡಿ ಎನ್ ನೇತೃತ್ವದ ತಂಡ ಸ್ಥಳಕ್ಕೆ ತೆರಳಿದಾಗ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರೊಂದು ನಿಂತಿರುವುದು ಕಂಡು ಬಂದಿದೆ.
ಕಾರನ್ನು
ಪರಿಶೀಲಿಸಿದಾಗ ಕಾರಿನೊಳಗೆ ಹಿಂಸಾತ್ಮಕವಾಗಿ ಮೂರು ದನಗಳನ್ನು ತುಂಬಿಸಿರುವುದು ಕಂಡು ಬಂದಿದೆ. ಕಾರು ನಿಲ್ಲಿಸಿದ ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ತೆರೆದ ದನದ ಕೊಟ್ಟಿಗೆಯಲ್ಲಿಯೂ 2 ಜಾನುವಾರುಗಳು ಕಂಡುಬಂದಿದ್ದು, ಜಾನುವಾರುಗಳನ್ನು ಮೂರು ಜನರು ಬಿಚ್ಚಲು ಪ್ರಯತ್ನಿಸುತ್ತಿದ್ದವರು ಪೊಲೀಸರನ್ನು ಕಂಡು ಓಡಿಹೋಗಿದ್ದಾರೆ.


ಓಡಿ
ಪರಾರಿಯಾದ ವ್ಯಕ್ತಿಗಳು ಕೊಟ್ಟಿಗೆಯಲ್ಲಿದ್ದ ದನಗಳನ್ನು ಹಾಗೂ ಕಾರಿನಲ್ಲಿದ್ದ ಜಾನುವಾರುಗಳನ್ನು ಮಾಂಸ ಮಾಡುವ ಉದ್ದೇಶಕ್ಕಾಗಿ ಅಕ್ರಮವಾಗಿ ಸಾಗಾಟ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ.
ದನಗಳನ್ನು,
ಹಗ್ಗವನ್ನು ಮತ್ತು ಕಾರನ್ನು
ಸ್ವಾಧೀನಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

