24.5 C
Kadaba
Monday, March 17, 2025

ಹೊಸ ಸುದ್ದಿಗಳು

ದಕ್ಷಿಣ ಕನ್ನಡ: ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ವೇಳೆ ಪಾನೀಯ, ಸಿಹಿತಿಂಡಿ ನೀಡಬೇಡಿ: ಭಜನಾ ಮಂದಿರದಿಂದ ಮಸೀದಿಗೆ ಬರೆದ ಪತ್ರ ವೈರಲ್

Must read

 ಕಡಬ ಟೈಮ್, ಯಾವುದೇ
ಸಮುದಾಯದ   ಧಾರ್ಮಿಕ ಕಾರ್ಯಕ್ರಮಗಳ ಈ
ರ್ಯಾಲಿಗಳ ವೇಳೆ ಹಲವಾರು ಕಡೆಗಳಲ್ಲಿ ಹಿಂದೂಮುಸ್ಲಿಮರ ಸೌಹಾರ್ದತೆಯ ದ್ಯೋತಕವಾಗಿ ಪರಸ್ಪರರು ಸಿಹಿ ತಿಂಡಿಪಾನೀಯ ಹಂಚುವುದು ಸಾಮಾನ್ಯವಾಗಿದೆ.   ಅದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಕೂಡ ಹೊರತಾಗಿಲ್ಲ. ಆದರೆ, ವರ್ಷ ದಕ್ಷಿಣ
ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಹೊಸ ಬೆಳವಣಿಗೆ
ನಡೆದಿದ್ದು ಭಾರೀ ಸುದ್ದಿಯಾಗುತ್ತಿದೆ.

kadabatimes.in


kadabatimes.in

ದಕ್ಷಿಣ
ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಎಂಬಲ್ಲಿರುವ ಭಜನಾ ಮಂದಿರವೊಂದರ ಆಡಳಿತ ಮಂಡಳಿಯವರು, ಸ್ಥಳೀಯ ಮಸೀದಿಗೆ ಪತ್ರ ಬರೆದಿರುವುದು ಚರ್ಚೆಗೆ ಕಾರಣವಾಗಿದೆ. ಬೋಳಂತೂರಿನ
ಸಮೀಪ ಇರುವ ತುಳಸೀವನ ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರವು ಪತ್ರವನ್ನು ಸ್ಥಳೀಯ
ಮಸೀದಿಯ ಆಡಳಿತ ಕಮಿಟಿಗೆ ಕಳೆದ ಗುರುವಾರ(ಸೆ.5)ರಂದು ತಲುಪಿಸಿರುವುದಾಗಿ ತಿಳಿದು ಬಂದಿದೆ.

ವೈರಲ್ ಆಗಿರುವ ಪತ್ರ


ವೈರಲಾಗಿರುವ
ಪತ್ರದಲ್ಲಿ, “ಕಳೆದ ವರ್ಷದ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಪಾನೀಯ ಮತ್ತು ಸಿಹಿತಿಂಡಿ ವಿತರಣೆಯನ್ನು ತಮ್ಮ ಸಮಾಜ ಬಾಂಧವರು ನೀಡಿರುತ್ತಾರೆ. ಅದನ್ನು ಸ್ವೀಕರಿಸಿದ ನಮ್ಮ ಕೆಲವು ಮಕ್ಕಳು ಅಸ್ವಸ್ಥರಾಗಿರುತ್ತಾರೆ. ಇದರಿಂದ ನಮ್ಮ ಸಾಮರಸ್ಯ ಕೆಡುತ್ತದೆ. ಇದರ ಮುಂಜಾಗ್ರತೆಗಾಗಿ ತಮ್ಮಲ್ಲಿ ಮನವಿ ಮಾಡುವುದೇನೆಂದರೆ, ಇನ್ನು ಮುಂದಕ್ಕೆ ಶೋಭಾ ಯಾತ್ರೆಯಲ್ಲಿ ತಮ್ಮ ಸಮಾಜ ಬಾಂಧವರು ಯಾವುದೇ ಪಾನೀಯ ಹಾಗೂ ತಿಂಡಿ ತಿನಸುಗಳನ್ನು ನೀಡಬಾರದಾಗಿ ಮೂಲಕ ವಿನಂತಿಸುತ್ತೇವೆ.
ಆದ್ದರಿಂದ ನಮ್ಮ ಶೋಭಾಯಾತ್ರೆಗೆ ನಿಮ್ಮ ಎಲ್ಲಾ ಸಮಾಜ ಬಾಂಧವರು ಮೇಲಿನ ವಿಷಯಕ್ಕೆ ಸಹಕರಿಸುವಂತೆ ನಿಮ್ಮಲ್ಲಿ ಮೂಲಕ ಮನವಿ
ಮಾಡುತ್ತೇವೆಎಂದು ಉಲ್ಲೇಖಿಸಲಾಗಿದೆ.

kadabatimes.in



ಬೆಳವಣಿಗೆಯ ಬಗ್ಗೆ ಡಿಜಿಟಲ್ ಮಾದ್ಯವೊಂದು    ಮಸೀದಿ ಕಮಿಟಿಯ ಅಧ್ಯಕ್ಷ  ಮುಹಮ್ಮದ್
ಅವರ ಹೇಳಿಕೆಯನ್ನು ಪ್ರಕಟಿಸಿದೆ.   ಪತ್ರ
ಕಳೆದ ಗುರುವಾರ ನಮ್ಮ ಮಸೀದಿಗೆ ಬಂದಿದೆ.  ನಾವು
ಕಳೆದ ವರ್ಷ ಮಸೀದಿ ಕಮಿಟಿಯ ವತಿಯಿಂದ ಯಾವುದೇ ತಿಂಡಿಯಾಗಲೀ, ಪಾನೀಯವಾಗಲೀ ಶೋಭಾಯಾತ್ರೆಯ ವೇಳೆ ನೀಡಿರಲಿಲ್ಲ. ಊರಿನ ಕೆಲವು ಯುವಕರು ತಮ್ಮ ಕೈಯಿಂದ ಹಣ ಹಾಕಿ, ಐಸ್
ಕ್ರೀಂ ಹಾಗೂ ತಂಪು ಪಾನೀಯದ ವ್ಯವಸ್ಥೆ ಮಾಡಿದ್ದರುಎಂದು ತಿಳಿಸಿರುವುದಾಗಿ ಸುದ್ದಿ ಪ್ರಕಟಿಸಲಾಗಿದೆ.


kadabatimes.in

ಕಳೆದ
ವರ್ಷ ನೀಡಿದ್ದ ತಿಂಡಿ ತಿನಿಸುಗಳು ತಿಂದ ಬಳಿಕ  ಮಕ್ಕಳು
ಅಸ್ವಸ್ಥರಾಗಿದ್ದ  ಬಗ್ಗೆ ಮಾಹಿತಿ ಭಜನಾ ಮಂದಿರದ
ಕಡೆಯಿಂದಾಗಲೀ, ಅಸ್ವಸ್ಥರಾಗಿದ್ದರು ಎನ್ನಲಾಗಿರುವ ಮಕ್ಕಳ ಪೋಷಕರಾಗಲೀ ತಿಳಿಸಿಲ್ಲ. ಈಗ ಪತ್ರದ ಬಂದಿದೆ.
ಅದಕ್ಕೆ ನಾವು ಯಾವುದೇ ಉತ್ತರ ನೀಡಿಲ್ಲ.  ಅದರಲ್ಲಿ
ನಮಗೆ ಆಸಕ್ತಿಯೂ ಇಲ್ಲಎಂದು ಸ್ಪಷ್ಟಪಡಿಸಿದ್ದಾರೆ. ಪತ್ರವು ಕರಾವಳಿಯಲ್ಲಿ
ಚರ್ಚೆಗೆ ಗ್ರಾಸವಾಗಿದ್ದು, ಇದು ಸೌಹಾರ್ದ ವಾತಾವರಣ ಸೃಷ್ಟಿಸುವುದನ್ನು ತಡೆಯುವ ಪ್ರಯತ್ನವಾಗಿದೆ ಎಂದು ಜನರು ಸಾಸಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.