24.5 C
Kadaba
Sunday, March 16, 2025

ಹೊಸ ಸುದ್ದಿಗಳು

ಕುಂತೂರು ಶಾಲಾ ಕಟ್ಟಡ ಕುಸಿತ ಘಟನೆ:ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಹೇಳಿದ್ದೇನು?

Must read

 ಕಡಬ ಟೈಮ್ಸ್, ಆಲಂಕಾರು:  ಪೆರಾಬೆ
ಗ್ರಾಮದ ಕುಂತೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಕುಸಿತಗೊಂಡ  ಸ್ಥಳಕ್ಕೆ   ಸುಳ್ಯ
ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಶಾಲಾ ಅಡಳಿತ ಮಂಡಳಿ ಹಾಗು ಶಿಕ್ಷಕರ ಜೊತೆ ಮಾತುಕತೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದರು.

kadabatimes.in


kadabatimes.in


ವೇಳೆ ಮಾತನಾಡಿದ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಸರಕಾರಿ ಶಾಲಾ ಕಟ್ಟಡಗಳು ತುಂಬಾ ಹಳೆಯದಾಗಿದ್ದು ಬಗ್ಗೆ ಶಿಕ್ಷಣ
ಸಚಿವರಿಗೆ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ. ಸರಕಾರದಲ್ಲಿ ಹಣ ಇಲ್ಲದ ಕಾರಣ
ಒಟ್ಟು 90 ಲಕ್ಷ ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸಲು ತಿಳಿಸಿದ್ದರು. ನಂತರ ಅದನ್ನು 30 ಲಕ್ಷಕ್ಕೆ ಕ್ರೀಯಾ ಯೋಜನೆ ಮಾಡಲು ತಿಳಿಸಿದ್ದರು ಅದರಲ್ಲಿ ಕುಂತೂರು ಸರಕಾರಿ ಶಾಲೆಗೆ ರೂ 1,50,000 ಹಣದಲ್ಲಿ ದುರಸ್ತಿ ಕಾಮಗಾರಿ ನಡೆಸುವ ಸಂಧರ್ಭದಲ್ಲಿ ದುರ್ಘಟನೆ ನಡೆದಿದೆ.

kadabatimes.in

75 ವರ್ಷಗಳ
ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡಲು ಸರಕಾರಕ್ಕೆ ಮನವಿ ಮಾಡುತ್ತೇನೆ.ಇಲ್ಲಿದ್ದ ಶಿಥಿಲಗೊಂಡ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಆಗುವ ತನಕ  ಮಕ್ಕಳಿಗೆ
ಸರಕಾರಿ ಅಥವಾ ಖಾಸಗಿಯವರ ಕೊಠಡಿಯಲ್ಲಿ ತರಗತಿ ನಡೆಸುವಂತೆ ಸಂಬಂಧ ಪಟ್ಟ ಇಲಾಖೆಯವರಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.


ಜಿ.ಪಂ ಇಂಜಿನಿಯರ್ ಭರತ್
ಭೇಟಿ: ಶಾಸಕರು ಹಾಗೂ ಸಹಾಯಕ ಆಯುಕ್ತರ ಸೂಚನೆಯಂತೆ .28 ರಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಅಸಿಸ್ಟೆಂಟ್ ಇಂಜಿನಿಯರ್ ಭರತ್ ಭೇಟಿ ನೀಡಿ ಶಾಲಾ ಕೊಠಡಿ ಗುಣಮಟ್ಟವನ್ನು ಪರಿಶೀಕ್ಷಿಸಿ ಕುಂತೂರು ಸರಕಾರಿ ಶಾಲಾ ಕೊಠಡಿಯು ಶಿಥಿಲ ವ್ಯವಸ್ಥೆಯಲ್ಲಿದ್ದು ಇಲ್ಲಿ ತರಗತಿ ನಡೆಸಲು ಅಸಾಧ್ಯ ಬಗ್ಗೆ ಸಂಬಂಧಪಟ್ಟ
ಇಲಾಖೆಗೆ ವರದಿಯನ್ನು ನೀಡುವುದಾಗಿ ತಿಳಿಸಿದರು. ಸ್ಥಳದಲ್ಲಿ ಕಡಬ ತಾ.ಪಂ . ಭವಾನಿ ಶಂಕರ್
ಉಪಸ್ಥಿತರಿದ್ದರು.

kadabatimes.in