ಕಡಬ ಟೈಮ್ಸ್: ಅರಿಯಡ್ಕ
ಗ್ರಾಮದ ಕೌಡಿಚ್ಚಾರು ಸಮೀಪದ ಕುರುಂಜ ಮಣ್ಣಾಪು ಎಂಬಲ್ಲಿ ಮಂಗಳವಾರ ಬೆಳಗ್ಗೆ ಕಾಡು ಹಂದಿ ದಾಳಿ ನಡೆಸಿದ ಪರಿಣಾಮ ಸ್ಕೂಟರ್ ಸವಾರ ಗಾಯಗೊಂಡ ಘಟನೆ ವರದಿಯಾಗಿದೆ.




ಕುಂಬ್ರ
ಪೆಟ್ರೋಲ್ ಬಂಕ್ನ ಮ್ಯಾನೇಜರ್ ಆಗಿರುವ
ಧನುಷ್ ಗಾಯಗೊಂಡವರು.


ಮುಂಜಾನೆ
ಸ್ಕೂಟರ್ನಲ್ಲಿ
ಕಚೇರಿಗೆ ಬರುತ್ತಿದ್ದ ವೇಳೆ ಏಕಾಏಕಿ ಕಾಡು ಹಂದಿ ದಾಳಿ ನಡೆಸಿದ್ದು. ನಿಯಂತ್ರಣ ತಪ್ಪಿ ಬಿದ್ದ ವೇಳೆ ಅವರ ಮೇಲೆ
ಎರಗಿ ಗಾಯಗೊಳಿಸಿದೆ .


ದೇಹದ
ವಿವಿಧೆಡೆ ಗಾಯಗಳಾಗಿವೆ. ಅವರ ಬಲ ಕೈಗೆ ತಿವಿದ
ಕಾರಣ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.