ಕಡಬ ಟೈಮ್ಸ್: ಹಾಸನ ಜಿಲ್ಲೆಯ
ಸಕಲೇಶಪುರ-ಬಾಳ್ಳುಪೇಟೆಯ ನಡುವೆ ರೈಲು ಹಳಿಯ ಮೇಲೆ ಗುಡ್ಡ ಕುಸಿದು ಬಿದ್ದು ಹಾಸನ-ಮಂಗಳೂರು ನಡುವಿನ
ಹಳಿಯ ಮೇಲೆ ಭೂಕುಸಿತವಾದ ಹಿನ್ನೆಲೆಯಲ್ಲಿ ಮೈಸೂರು ವಿಭಾಗ ವ್ಯಾಪ್ತಿಯಲ್ಲಿ ಪುತ್ತೂರು-ಬೆಂಗಳೂರು
ಸಹಿತ 10 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.




ಮಣ್ಣು
ತೆರವು ಕಾರ್ಯಾಚರಣೆ ಮುಂದುವರಿದಿದೆಯಾದರೂ, ಹಳಿಯ ಮೇಲೆ ಬೃಹತ್ ಪ್ರಮಾಣದ ಮಣ್ಣಿನ ರಾಶಿ ಬಿದ್ದುದರಿಂದ
ತೆರವು ಕಾರ್ಯಾಚರಣೆ ಕಾಮಗಾರಿ ಸಂಪೂರ್ಣವಾಗಿಲ್ಲ.ಈ ಕಾರಣದಿಂದ 10 ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ.




ಬೆಂಗಳೂರು–ಕಾರವಾರ ಎಕ್ಸ್ಪ್ರೆಸ್ (16595), ಕಾರವಾರ– ಕೆಎಸ್ಆರ್ ಬೆಂಗಳೂರು ಪಂಚಗಂಗಾ ಸೂಪರ್–ಫಾಸ್ಟ್ ಎಕ್ಸ್ಪ್ರೆಸ್(16596), ಬೆಂಗಳೂರು–ಮುರ್ಡೇಶ್ವರ ಎಕ್ಸ್ಪ್ರೆಸ್ (16585),ಮುರ್ಡೇಶ್ವರ್–ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್(16586), ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ(07377),ಮಂಗಳೂರು ಸೆಂಟ್ರಲ್–ವಿಜಯಪುರ ವಿಶೇಷ ಎಕ್ಸ್ಪ್ರೆಸ್(07378),ಕಾರವಾರ್–ಯಶವಂತಪುರ ಎಕ್ಸ್ಪ್ರೆಸ್(16516), ಯಶವಂತಪುರ–ಕಾರವಾರ್ ಎಕ್ಸ್ಪ್ರೆಸ್ (16575),ಕಣ್ಣೂರು–ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16512)ಮತ್ತು ಕೆಸ್ಆರ್ಬೆಂಗಳೂರು–ಕಣ್ಣೂರು(16511)ರೈಲು ಸಂಚಾರವನ್ನು ರದ್ದುಪಡಿಸಲಾಗಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೇ ಇಲಾಖೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ|ಮಂಜುನಾಥ್ ಕನಮಡಿ
ತಿಳಿಸಿದ್ದಾರೆ.