



ಕಡಬ ಟೈಮ್, ನೆಲ್ಯಾಡಿ: ಕಡಬ ತಾಲೂಕಿಗೆ ಸಂಬಂಧಪಟ್ಟ ಕೌಕ್ರಾಡಿ,
ನೆಲ್ಯಾಡಿ, ಗೋಳಿತ್ತೊಟ್ಟು ಗ್ರಾಮ ಪಂಚಾಯತ್ಗೆ ಒಳಪಟ್ಟ ಗ್ಯಾರಂಟಿ ಯೋಜನೆಗಳ ನೋಂದಾವಣೆಗೆ ಬಾಕಿ
ಇರುವ ಮತ್ತು ತಿರಸ್ಕೃತ ಅರ್ಜಿಗಳ ವಿಲೇವಾರಿ ಶಿಬಿರ ಜ.29ರಂದು ಬೆಳಿಗ್ಗೆ 10.30ರಿಂದ ಅಪರಾಹ್ನ
2 ಗಂಟೆ ತನಕ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಲಿದೆ.


ಸಭೆಯಲ್ಲಿ
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಮಾಹಿತಿ ಕೇಂದ್ರ ತೆರೆದು ಅರ್ಜಿಗಳ
ವಿಲೇವಾರಿ ಮಾಡಲಿದ್ದಾರೆ.


ಫಲಾನುಭವಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಪಂಚ ಗ್ಯಾರಂಟಿ
ಯೋಜನೆ ಅನುಷ್ಠಾನ ಸಮಿತಿ ತಿಳಿಸಿದೆ.