ಮುಖ್ಯಾಂಶಗಳು:




- ಅರಣ್ಯ ಪ್ರದೇಶವನ್ನು ಜಿರೋ
ಪಾಯಿಂಟ್ ನಿಂದಲೇ ಗುರುತಿಸಬೇಕು - ಅರಣ್ಯ
ಭೂಮಿಗಳಿಗೆ ಬಫರ್ ಜೋನ್ ಇಡಬಾರದು - ಅರಣ್ಯ ಭೂಮಿಯನ್ನು ಸರ್ವೆ ನಡೆಸಬೇಕು
- ನ.15ಕ್ಕೆ
ಸುಬ್ರಹ್ಮಣ್ಯದಲ್ಲಿ ಗುಂಡ್ಯ
–ಸುಬ್ರಹ್ಮಣ್ಯ ಹೆದ್ದಾರಿ
ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ
![]() ![]() |
ಕುಟ್ರುಪ್ಪಾಡಿ ಗ್ರಾ.ಪಂ ಮುಂಭಾಗದಲ್ಲಿ ಸೇರಿದ ಗ್ರಾಮದ ಜನರು |
ಕಡಬ:
ಹಲವು ವರ್ಷಗಳಿಂದ ತಾರ್ಕಿಕ ಅಂತ್ಯ ಕಾಣದ ಕಸ್ತೂರಿ ರಂಗನ್ ವರದಿಯ ವಿರುದ್ದ
ಕುಟ್ರುಪ್ಪಾಡಿ ಗ್ರಾಮ
ಪಂಚಾಯಿತಿ ಮುಂಭಾಗದಲ್ಲಿ ಶುಕ್ರವಾರ ಕಸ್ತೂರಿ
ರಂಗನ್ ವರದಿಯ ವಿರುದ್ದ ನಡೆದ ಪ್ರತಿಭಟನೆ ನಡೆಯಿತು.
ಮಲೆನಾಡು
ಜನಹಿತ ರಕ್ಷಣೆ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ನ.15ಕ್ಕೆ ಜನ
ಸೇರಿಸಿ ಸುಬ್ರಹ್ಮಣ್ಯದಲ್ಲಿ ಗುಂಡ್ಯ
–ಸುಬ್ರಹ್ಮಣ್ಯ ಹೆದ್ದಾರಿ
ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ . ಈ ಪ್ರತಿಭಟನೆಗೆ ಪ್ರತಿ
ಮನೆಯಿಂದಲೂ ಬರಬೇಕು ಅಲ್ಲದೆ ಮುಂದಿನ ದಿನಗಳಲ್ಲಿ ನಮ್ಮಲ್ಲಿ ಎಲ್ಲಾ ದಾಖಲೆಗಳು ಇರುವುದರಿಂದ ಕಾನೂನೂ ಹೋರಾಟವನ್ನು ಮಾಡಲಾಗುತ್ತದೆ ಎಂದರು.


ಅರಣ್ಯ
ಭೂಮಿಗಳನ್ನು ಜಂಟಿ ಸರ್ವೆ ಮಾಡುವುದು, ಪಶ್ಚಿಮಘಟ್ಟ ಪ್ರದೇಶಕ್ಕೆ ಗಡಿ ಗುರುತು ಮಾಡುವುದು ಮತ್ತು ಅರಣ್ಯ ಭೂಮಿಗಳಿಗೆ ಬಫರ್ ಜೋನ್ ಇಡಬಾರದು ಇಷ್ಟು ಅಂಶಗಳನ್ನು ಸರ್ಕಾರ ಮಾಡಿದರೆ
ಯಾವ ಅರಣ್ಯ ರಕ್ಷಣೆಯ ವರದಿಗೂ ರೈತರು ಭಯಪಡಬೇಕಿಲ್ಲ. ಪ್ರಸ್ತುತ
ಕಸ್ತೂರಿರಂಗನ್ ವರದಿಗೆ ನಮ್ಮ ವಿರೋಧವಿದೆ, ನಾವು ಪರಿಸರ ರಕ್ಷಣೆಗೆ ವಿರೋಧವಿಲ್ಲ, ಆದರೆ ಪರಿಸರ ಸಂರಕ್ಷಣೆಯ ನೆಪದಲ್ಲಿ ಜನರಿಗೆ ತೊಂದರೆ ಉಂಟು ಮಾಡುವುದನ್ನು ಸಹಿಸುವುದಿಲ್ಲ, ಮೊದಲು ಅರಣ್ಯ ಭೂಮಿಯನ್ನು ಸರ್ವೆ ನಡೆಸಬೇಕು, ಅಲ್ಲದೆ ಪಶ್ಚಿಮ ಘಟ್ಟ ಪ್ರದೇಶಕ್ಕೆ ಗಡಿ ಗುರುತು ಮಾಡಬೇಕು ಮತ್ತು ಅರಣ್ಯ ಪ್ರದೇಶವನ್ನು ಜಿರೋ ಪಾಯಿಂಟ್ ನಿಂದಲೇ ಗುರುತಿಸಬೇಕು ಇಷ್ಟು ಮಾಡಿದರೆ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
![]() ![]() |
ಮಲೆನಾಡು ಜನಹಿತ ರಕ್ಷಣೆ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಮಾತನಾಡುತ್ತಿರುವುದು |
ಜಿ.ಪಂ. ಮಾಜಿ ಸದಸ್ಯ
ಕೃಷ್ಣ ಶೆಟ್ಟಿ, ಜಿಲ್ಲಾ
ಪರಿಷತ್ ಮಾಜಿ ಸದಸ್ಯ ಸೈಯದ್ ಮೀರಾ ಸಾಹೇಬ್ , ಕುಟ್ರುಪಾಡಿ ಗ್ರಾ.ಪಂ. ಮಾಜಿ ಸದಸ್ಯ ಮ್ಯಾತ್ಯೂ ಟಿ.ಎಂ. ಅವರು
ಮಾತನಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕುಟ್ರುಪಾಡಿ ಗ್ರಾ.ಪಂ.ಅಧ್ಯಕ್ಷೆ ಸುಮನ, ಬಲ್ಯ
ಗ್ರಾಮ ಸಮಿತಿಯ ಅಧ್ಯಕ್ಷ ಯೋಗೀಂದ್ರ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

