ಕಡಬ ಟೈಮ್ಸ್ (KADABA TIMES): ಸವಣೂರು: ಕಡಬ ತಾಲೂಕು ಸವಣೂರು ಗ್ರಾಮದ ತೋಟದಲ್ಲಿ ವಿದ್ಯುತ್ ಕಳ್ಳತನ ಮಾಡಿರುವ ಖಚಿತ ಮಾಹಿತಿ ಮೇರೆಗೆ ಮಂಗಳೂರು ಮೆಸ್ಕಾಂ ಜಾಗೃತದಳ ಸಿಬ್ಬಂದಿಗಳಿಂದ ಪತ್ತೆ ಹಚ್ಚಿದ್ದಾರೆ.


ಕಣಿಮಜಲು ಎಂಬಲ್ಲಿರುವ ಅಬ್ದುಲ್ ಆಸೀಫ್ ರೆಂಜಾಲಾಡಿಯವರ ತೋಟದಲ್ಲಿ ವಿದ್ಯುತ್ ಕಂಬ ಅಳವಡಿಸಿ ಅನಧಿಕೃತವಾಗಿ ಸಂಪರ್ಕ ನೀಡಿದ ಗುತ್ತಿಗೆದಾರ ತಾಜುದ್ದಿನ್ ಕೂರತ್ ಹಾಗೂ ಅಬ್ದುಲ್ ಆಸೀಫ್ ರೆಂಜಲಾಡಿಯವರ ಮೇಲೆ ಪ್ರಕರಣ ದಾಖಲಾಗಿದೆ.






ಅಲ್ಲದೆ ಬೆಳಂದೂರಿನಲ್ಲಿಯೂ ಇದೇ ರೀತಿಯ ಪ್ರಕರಣ ದಾಖಲಾಗಿದ್ದು, ತಾಜುದ್ದೀನ್ ಅವರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದಾಗಿ ಹಲವರಿಂದ ಹಣ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದೆ.