ಕಡಬ ಟೈಮ್ಸ್(KADABA TIMES): ನಾನು 37 ವರ್ಷದಿಂದ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಕೊಂಡಿದ್ದೇನೆ , ಲಾಭಿ ನಡೆಸಲು ಬೆಂಗಳೂರಿಗೆ ಹೋಗಲು ನನ್ನ ಬಳಿ ಹಣ ಇಲ್ಲ ಆದ್ದರಿಂದ ನನಗೂ ಒಂದು ಅವಕಾಶ ಕೊಡಿ ಎಂದು ಕಾಂಗ್ರೆಸ್ ಕಾರ್ಯಕರ್ತೆ ಲಕ್ಷ್ಮೀ ಸುಬ್ರಹ್ಮಣ್ಯ ಹೇಳಿಕೆ ನೀಡಿದ್ದಾರೆ.


ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯಲ್ಲಿ ಆದಿ ದ್ರಾವಿಡ ಜನಾಂಗವನ್ನು ಪರಿಗಣಿಸುವಂತೆ ಕೇಳಿಕೊಂಡಿರುವ ಇವರು ಸಮಿತಿಯಲ್ಲಿ ಪರಿಶಿಷ್ಟ ಜನಾಂಗದವರನ್ನು ವಿಶೇಷವಾಗಿ ಪರಿಗಣಿಸಿ ಎಂದು ವಿನಂತಿಸಿದ್ದಾರೆ.




ನಾನು ಕಾಂಗ್ರೆಸ್ ನ ಸುಳ್ಯ ತಾಲೂಕು ಬ್ಲಾಕ್ ನ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ಸಿ ಘಟಕದ ಅಧ್ಯಕ್ಷಳಾಗಿ, ಗ್ರಾ.ಪಂ ಸದಸ್ಯಳಾಗಿ ಕೆಲಸ ಮಾಡಿದ್ದೇನೆ. ಈ ಭಾರಿ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತನ ಕೊಡಿಸುವುದಾಗಿ ಮಾಜಿ ಸಚಿವ ರಮಾನಾಥ ರೈ ಭರವಸೆ ನೀಡಿದ್ದರು.


ಹೆಚ್ಚಿನ ಎಲ್ಲಾ ಸರ್ಕಾರಿ ಸಮಿತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಅವಕಾಶ ಇದೆ. ಅದೇ ರೀತಿ ವ್ಯವಸ್ಥಾಪನಾ ಸಮಿತಿಯಲ್ಲೂ ಎರಡಕ್ಕೂ ಅವಕಾಶ ಕೊಡಿ.ನಮ್ಮ ಸುಬ್ರಹ್ಮಣ್ಯದಲ್ಲಿ ನಮ್ಮವರದ್ದು 48 ಮನೆಗಳುವೆ ನಮಗೂ ಅವಕಾಶ ಕಲ್ಪಿಸಿ ಈ ಭಾರಿಯಾದರೂ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ಕೊಡಿಸಿ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.