24.9 C
Kadaba
Tuesday, April 1, 2025

ಹೊಸ ಸುದ್ದಿಗಳು

ಕಡಬ:ಹಬ್ಬದ ದಿನವೇ ದುರಂತ| ಜವರಾಯನಾಗಿ ಬಂದ ದೂಪದ ಮರ: ಸ್ಥಳದಲ್ಲೇ ಸವಾರ ಮೃತ್ಯು

ಕಡಬ ಟೈಮ್ಸ್ ವೆಬ್ ತಾಣದಲ್ಲಿ ಸುದ್ದಿಗಳನ್ನು ಪರಿಶೀಲಿಸಿಯೇ ಪ್ರಕಟಿಸಲಾಗುತ್ತಿದೆ. ಒಂದು ವೇಳೆ ಆಪೇಕ್ಷಾರ್ಹ, ಅಥವಾ ತಪ್ಪು ಮಾಹಿತಿಗಳು ಕಂಡು ಬಂದಲ್ಲಿ ಇಲ್ಲವೇ ಸಲಹೆಗಳಿದ್ದರೆ  ಸಂಪಾದಕರ ದೂರವಾಣಿ ಸಂಖ್ಯೆ 93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.

Must read

kadabatimes.in
ಕೋಡಿಂಬಾಳ ಗ್ರಾಮದ ಮುರಚೆಡವು ಬಳಿ ನಡೆದ ಅಪಘಾತದ ದೃಶ್ಯ

kadabatimes.in
kadabatimes.in
kadabatimes.in

ಕಡಬ: ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ  ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೋಡಿಂಬಾಳ ಗ್ರಾಮದ ಪುಳಿಕುಕ್ಕು ಸಮೀಪ ನಡೆದಿದೆ.
ಮೃತ ಪಟ್ಟ ಸ್ಕೂಟಿ ಸವಾರ ಎಡಮಂಗಲದ ಸೊಸೈಟಿವೊಂದರಲ್ಲಿ  ಪಿಗ್ಮಿ ಸಂಗ್ರಹಕಾರರಾಗಿದ್ದ ದೇವಸ್ಯ ನಿವಾಸಿ ಸೀತಾರಾಮ (58ವ )ಎಂದು ಗುರುತಿಸಲಾಗಿದೆ.
 
ಶನಿವಾರ ಮುಂಜಾನೆ ಮನೆಯಿಂದ ಕಡಬದತ್ತ  ಆಗಮಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.  ಪಂಜ ಕಡಬ ರಸ್ತೆಯ ಮೊರಚೆಡವು ಬಳಿ ರಸ್ತೆ ಬದಿಯಲ್ಲಿದ್ದ ದೂಪದ ಮರ ಬಿದ್ದಿರುವುದಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿರುವುದಾಗಿ ತಿಳಿದು ಬಂದಿದೆ. ಹಾಗು ಹಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ನಿಮ್ಮೂರಿನ ಸುದ್ದಿಗಳು, ಜಾಹೀರಾತುಗಳಿಗಾಗಿ  93804 74819 ಸಂಖ್ಯೆಯನ್ನು ಸಂಪರ್ಕಿಸಬಹುದು.ಇಲ್ಲವೇ kadabatimes@gmail.com ಗೆ ಇಮೇಲ್ ಕಳುಹಿಸಬಹುದು. ನಮ್ಮನ್ನು  Facebook ಅಥವಾ Youtube ನಲ್ಲಿ ಹಿಂಬಾಲಿಸಿ.